ಗುಣತ್ರಯ

ನಿತ್ಯ ಕಾಡುತ್ತಿವೆ ಏನಗೆ ಗುಣತ್ರಯಗಳು
ಅವೇ ರಜ ತಮ ಮತ್ತು ಸತ್ವಗಳು
ಒಂದೊಂದು ತನ್ನ ಇತಿಹಾಸ ಬಿತ್ತುವವು
ಈ ಮೂರು ಜೀವನ ಬಂಧನಕ್ಕೆ ಕಾರಣಗಳು

ಸ್ವಾರ್ಥ ಆಸೆ ಭೋಗದಲ್ಲಿ ತೇಲಿಸುವುದು
ತಮಗುಣವೆಂಬ ಕಾಣದ ಜಾತ ಶತ್ರು
ದೇಹ ಸುಖವೆ ಇದರ ಗುರಿಯಾಗಿಹುದು
ಜೀವನ ವಿನಾಶಕ್ಕೆ ಇದಾಗಿದೆ ಕತೃ

ತೃಸ್ಣೆಯ ಜಾಲವ ರಜೋ ಬೀಸುವುದು
ಕಾಮದ ಸನ್ನಿವೇಶಕ್ಕೆ ನಾಂದಿ ಹಾಡುವುದು
ಕರ್ಮಸಂಗದಿ ಈ ಆತ್ಮಕ್ಕೆ ಕಟ್ಟಿ ಹಾಕುವುದು
ಪಾಪದ ಹೊಂಡಗಳ ಆಳಕ್ಕೆ ತೋಡುವುದು

ಸತ್ವಗುಣ ಜ್ಞಾನದ ಸಲಾಕೆಯಾಗುವುದು
ದೇವರನ್ನು ತೋರುವ ಮಾರ್ಗನಿರ್ಮಿಸುವುದು
ಜ್ಞಾನ ಸಂಗದಿಂದ ಆತ್ಮ ಬಂಧಿಸುವುದು
ಮಾಣಿಕ್ಯ ವಿಠಲನಾದರೆ ಹರಿಯ ದರ್ಶಿಸುವುದು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೀನು ಯಾರು?
Next post ಕಾಲ್ತೊಡರುವ ಜಾತಿ

ಸಣ್ಣ ಕತೆ

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

cheap jordans|wholesale air max|wholesale jordans|wholesale jewelry|wholesale jerseys